ಅಪೂರ್ಣ
ಕೆಂಪಾಗಿವೆ ಕಣ್ಣು ಕತ್ತಲೆಯ ಕಾಟಕೆ
ಬಿಡುವ ನಿಡಿದಾದ ಉಸಿರಿಗೆ ಬಾಡಿದೆ ಬಾಡಿ
ಪಂಖವಿಲ್ಲದ ಹಕ್ಕಿ ಹಾರಲಾಗದೇ, ಸೋತು
ಹೋಗುವ ಮುನ್ನ ನನ್ನೆದೆಯ ಧಗೆಗೆ, ಸೋನೆಯಾಗು!
ಇಷ್ಟು ಹತ್ತಿರವಿದ್ದೂ, ದೂರವಿರಬೇಕಾದ ಪಾಡು
ಇಷ್ಟುದ್ದ ಬಿಟ್ಟಿರುವ ದಾಡಿಯನ್ನಾದರೂ ನೋಡು,
ಊಟ-ನಿದ್ದೆಗಳ ಕಾಲ್ಕಿತ್ತ ಓಟ, ಹೊಟ್ಟೆಯಲಿ ಕಾರ ಕಲೆಸಿದ ಆಟ
ದಯೆ ಬಾರದೇ ಇನ್ನೂ, ವರವ ಕೊಡು ಎನಗೆ ನೀನು!
ಬಾ ಇಲ್ಲಿ ಸಂಧಿಸು, ಇಂದೆನ್ನ ಬೆಂಗಳೂರಿನಲಿ
ನಿತ್ಯವೂ ಓಡಾಡೋ ವಿಜಯಾವತಾರ
ಪಾರ್ಕಿನಲಿ, ಥಿಯೇಟರಿನಲಿ, ಮಾಲ್ ನಲಿ, ಹೆಚ್ಚೆಸ್ಸಾರ್ ನಲಿ
ಸೋತು ಹೋಗುವ ಮುನ್ನ ಎದೆ-ಧರೆಗೆ ಮಳೆಯಾಗು !
ನಿಶಾಚರಿಯು ನಾನು, ಚಂದಿರನ ದೂರಿದೆ,
ಹಸಿದ ಬಡವನ ಕೈಗೆಟುಕದ ರೊಟ್ಟಿ ತುಣುಕು ನೀನು
ಅಳುವ ಕಂದಮ್ಮಗೆ ಹೆಚ್ಚು ಹಾಲೆಂದರು ಹಿರಿಯರು
ಮೊರೆ ಕೇಳದೇ ಇನ್ನೂ, ಅರ್ಧನಾರೀಶ್ವರ ನಾನು!
-ಶಶಿ
ಕೆಂಪಾಗಿವೆ ಕಣ್ಣು ಕತ್ತಲೆಯ ಕಾಟಕೆ
ಬಿಡುವ ನಿಡಿದಾದ ಉಸಿರಿಗೆ ಬಾಡಿದೆ ಬಾಡಿ
ಪಂಖವಿಲ್ಲದ ಹಕ್ಕಿ ಹಾರಲಾಗದೇ, ಸೋತು
ಹೋಗುವ ಮುನ್ನ ನನ್ನೆದೆಯ ಧಗೆಗೆ, ಸೋನೆಯಾಗು!
ಇಷ್ಟು ಹತ್ತಿರವಿದ್ದೂ, ದೂರವಿರಬೇಕಾದ ಪಾಡು
ಇಷ್ಟುದ್ದ ಬಿಟ್ಟಿರುವ ದಾಡಿಯನ್ನಾದರೂ ನೋಡು,
ಊಟ-ನಿದ್ದೆಗಳ ಕಾಲ್ಕಿತ್ತ ಓಟ, ಹೊಟ್ಟೆಯಲಿ ಕಾರ ಕಲೆಸಿದ ಆಟ
ದಯೆ ಬಾರದೇ ಇನ್ನೂ, ವರವ ಕೊಡು ಎನಗೆ ನೀನು!
ಬಾ ಇಲ್ಲಿ ಸಂಧಿಸು, ಇಂದೆನ್ನ ಬೆಂಗಳೂರಿನಲಿ
ನಿತ್ಯವೂ ಓಡಾಡೋ ವಿಜಯಾವತಾರ
ಪಾರ್ಕಿನಲಿ, ಥಿಯೇಟರಿನಲಿ, ಮಾಲ್ ನಲಿ, ಹೆಚ್ಚೆಸ್ಸಾರ್ ನಲಿ
ಸೋತು ಹೋಗುವ ಮುನ್ನ ಎದೆ-ಧರೆಗೆ ಮಳೆಯಾಗು !
ನಿಶಾಚರಿಯು ನಾನು, ಚಂದಿರನ ದೂರಿದೆ,
ಹಸಿದ ಬಡವನ ಕೈಗೆಟುಕದ ರೊಟ್ಟಿ ತುಣುಕು ನೀನು
ಅಳುವ ಕಂದಮ್ಮಗೆ ಹೆಚ್ಚು ಹಾಲೆಂದರು ಹಿರಿಯರು
ಮೊರೆ ಕೇಳದೇ ಇನ್ನೂ, ಅರ್ಧನಾರೀಶ್ವರ ನಾನು!
-ಶಶಿ